Dhanavanatari-yelguppa
Shridhrswamy

ಶ್ರೀ ಧನ್ವಂತರಿ ಮಹಾವಿಷ್ಣು ದೇವಸ್ಥಾನ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಎಲಗುಪ್ಪ (ಕರವಾ) ಗ್ರಾಮದಲ್ಲಿರುವ ಶ್ರೀ ಧನ್ವಂತರಿ ಮಹಾವಿಷ್ಣು ದೇವಸ್ಥಾನವು ಇಡೀ ಕರ್ನಾಟಕದಲ್ಲಿಯೇ ಏಕೈಕ ಧನ್ವಂತರಿ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊನ್ನಾವರದಿಂದ ಗೇರುಸೊಪ್ಪೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ 11.5 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ವರದಳ್ಳಿಯ ಶ್ರೀಧರ ಸ್ವಾಮಿಗಳು ಈ ಕ್ಷೇತ್ರದ ಮಹಿಮೆಯನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದು, ಇದು ಆರೋಗ್ಯ ಮತ್ತು ಆಯುರ್ವೇದದ ಅಧಿದೇವತೆಯಾದ ಧನ್ವಂತರಿ ನೆಲೆಸಿರುವ ಅಪರೂಪದ ಶಕ್ತಿ ಸ್ಥಳವಾಗಿದೆ. ಭಗವಾನ್ ಧನ್ವಂತರಿ ಮೂರ್ತಿಯು ಬಲಗೈಯಲ್ಲಿ ಅಮೃತ ಕಲಶವನ್ನು ಹಿಡಿದಿರುವುದು ಈ ಕ್ಷೇತ್ರದ ವಿಶಿಷ್ಟತೆಯಾಗಿದ್ದು, ಇದು ಶ್ರೀಮದ್ಭಾಗವತದ ಉಲ್ಲೇಖಗಳಿಗೆ ಕರಾರುವಾಕ್ಕಾಗಿ ಹೊಂದುತ್ತದೆ

ಇಲ್ಲಿನ ತೀರ್ಥಕೆರೆಯಲ್ಲಿ (ಪುಷ್ಕರಣಿ) ಸಾಕ್ಷಾತ್ ಅಮೃತ ಬಿಂದುಗಳಿದ್ದು, ಇದರಲ್ಲಿ ಸ್ನಾನ ಮಾಡುವುದರಿಂದ ಮತ್ತು ತೀರ್ಥ ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಸೋರಿಯಾಸಿಸ್‌ನಂತಹ ಕಠಿಣ ಚರ್ಮರೋಗಗಳು, ತಲೆಕೂದಲು ಉದುರುವಿಕೆ ಸೇರಿದಂತೆ ಅನೇಕ ದೈಹಿಕ ಮತ್ತು ಕೌಟುಂಬಿಕ ಅನುವಂಶಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ. ಅನಾರೋಗ್ಯ ಪೀಡಿತರು ಹಾಗೂ ಆರೋಗ್ಯವಂತರು ಆಯುಷ್ಯ ವೃದ್ಧಿಗಾಗಿ ಇಲ್ಲಿಗೆ ಆಗಮಿಸಿ ಧನ್ವಂತರಿ ಹೋಮ, ಮೃತ್ಯುಂಜಯ ಹೋಮ, ಶತರುದ್ರ, ರುದ್ರಾರಾಧನೆ ಹಾಗೂ ಚರ್ಮವ್ಯಾಧಿಗಳಿಗಾಗಿ 'ತುಕ್ಕದೋಷಹರ ಶಾಂತಿ'ಯಂತಹ ವೇದೋಕ್ತ ಕರ್ಮಗಳನ್ನು ಶ್ರದ್ಧೆಯಿಂದ ಮಾಡಿಸುತ್ತಾರೆ. ಪ್ರತಿ ವರ್ಷ ಕಾರ್ತಿಕ ಮಾಸದ ಬಹುಳ ಏಕಾದಶಿ, ದ್ವಾದಶಿ ಮತ್ತು ತ್ರಯೋದಶಿಯಂದು ಸತತ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು, ಲಕ್ಷ ಜಪ ಹಾಗೂ ನವಗ್ರಹಪೂರ್ವಕ ಹೋಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಧನ್ವಂತರಿ ಜಯಂತಿಯನ್ನು ಇಲ್ಲಿ ಆಚರಿಸಲಾಗುತ್ತದೆ.

ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಪಾರಂಪರಿಕ ಆಯುರ್ವೇದ ವೈದ್ಯರಾದ ಡಾ. ಗೋಪಾಲ್ ಹೆಗಡೆಯವರು ತಮ್ಮ ಪೂರ್ವಜರ ಪರಂಪರೆಯನ್ನು ಮುಂದುವರಿಸಿಕೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಜ್ಯೋತಿಷ್ಯ, ಕುಂಡಲಿ ಪರಿಶೀಲನೆ ಹಾಗೂ ಔಷಧೋಪಚಾರಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಿರ್ಮಿಸಲಾಗಿರುವ 50 ಎಕರೆ ವಿಸ್ತೀರ್ಣದ 'ಧನ್ವಂತರಿ ವನ'ದ ಅಪರೂಪದ ವನಸ್ಪತಿಗಳ ಔಷಧದೊಂದಿಗೆ ದೈವಿಕ ಮಂತ್ರಗಳ ಶಕ್ತಿಯನ್ನು ಸಂಪುಟೀಕರಿಸಿ ರೋಗಿಗಳಿಗೆ ನೀಡಲಾಗುತ್ತದೆ. ರೋಗಿಗಳ ಮನಸ್ಸಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಮೂತ್ರಪಿಂಡದ ಕಲ್ಲು (ಕಿಡ್ನಿ ಸ್ಟೋನ್), ಮಧುಮೇಹ, ಸಂತತಿಹೀನತೆಯಂತಹ ಜಟಿಲ ಸಮಸ್ಯೆಗಳಿಗೂ ಇಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗುತ್ತಿದ್ದು, ದೇವರ ಮೇಲಿನ ಶ್ರದ್ಧಾ-ಭಕ್ತಿ ಹಾಗೂ ಧನ್ವಂತರಿ ಮಹಾವಿಷ್ಣುವಿನ ಅನುಗ್ರಹದಿಂದ ಸಕಲ ಕಾಯಿಲೆಗಳೂ ನಿವಾರಣೆಯಾಗುತ್ತವೆ ಎಂಬುದು ಈ ತಾಣದ ಪ್ರಮುಖ ಸಂದೇಶವಾಗಿದೆ.

Shri Dhanvantari Temple video thumbnail Watch on YouTube
Shri Dhanvantari Mahavishnu Temple

Temple Leadership

President (ಅಧ್ಯಕ್ಷರು)

Shree G.K.Hegde
Shri Dhanvantari Mahavishnu Temple, Yalaguppa (Karava), Honnavar Taluk, Uttara Kannada, Karnataka
ದೇವಸ್ಥಾನದ ಸೇವೆಗಳು

ಸೇವೆಗಳ ಪಟ್ಟಿ

Temple Seva & Pooja Services

01

ಬ್ರಹ್ಮ ಕಲಶಾಭಿಷೇಕ

Brahma Kalashabhisheka
₹200
02

ಶ್ರೀ ಧನ್ವಂತರಿ ಜಪ

Shri Dhanvantari Japa (1000)
₹300
04

ಶ್ರೀ ಗಣಪತಿ ಹೋಮ – ಸಾಮೂಹಿಕ

Shri Ganapati Homa – Samuhika
₹6,000
05

ಶ್ರೀ ಸತ್ಯನಾರಾಯಣ ವ್ರತಕಥಾ ಪೂಜೆ

Shri Satyanarayana Vratakatha Puja
₹6,000
06

ಶ್ರೀ ಧನ್ವಂತರಿ ಮಹಾಯಾಗದ ಸಹಭಾಗಿತ್ವ

Shri Dhanvantari Mahayaga Sahabhagithva
₹1,000
07

ಶ್ರೀ ಸತ್ಯಗಣಪತಿ ವ್ರತಕಥಾ ಪೂಜೆ

Shri Satyaganapati Vratakatha Puja
₹1,000
08

ಸಾಮೂಹಿಕ ಅನ್ನದಾನ ಸೇವೆ

Samuhika Annadana Seva
₹1,500
09

ನವಗ್ರಹ ಹೋಮ

Navagraha Homa
₹11,500
10

ಶ್ರೀ ಧನ್ವಂತರಿ ವ್ರತಕಥಾ ಪೂಜೆ – ಸಾಮೂಹಿಕ

Shri Dhanvantari Vratakatha Puja – Samuhika
₹10,000
11

ಶ್ರೀ ಲಕ್ಷ್ಮೀನಾರಾಯಣ ಹವನ – ಸಾಮೂಹಿಕ

Shri Lakshminarayana Havana – Samuhika
₹19,000
12

ಸಾಮೂಹಿಕ ಶ್ರೀ ಧನ್ವಂತರಿ ಹವನ

Samuhika Shri Dhanvantari Havana
₹10,000
13

ಸುಪ್ರಭಾತ ಶ್ರೀ ಧನ್ವಂತರಿ ಹೋಮ – ಪ್ರತ್ಯೇಕ

Suprabhata Shri Dhanvantari Homa – Pratyeka
₹19,000
ಸೂಚನೆ: ಸೇವೆಗಳ ಮೊತ್ತದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರದಂತೆ ಬದಲಾವಣೆ ಇರುವ ಸಾಧ್ಯತೆ ಇದೆ.
Note: Seva charges are subject to change as per the temple administration.

Visit the Dhanvantari Mahavishnu Temple

Shri Dhanvantari Mahavishnu Temple, Yalaguppa (Karava), Honnavar Taluk, Uttara Kannada, Karnataka
+91 9731487135 / 9480604040 / 08202010458
sridhanvantarimahavishnu@gmail.com
Darshan: 9:00 AM - 1:00 PM | 4:00 PM - 6:00 PM